- ಶಾರ್ಜಾದ ಕನಾತ್ ಅಲ್ ಕಸ್ಬಾಕ್ಕೊಂದು ಭೇಟಿ.-
- ಅರ್ಶದ್ ಹುಸೇನ್ ಎಂ.ಹೆಚ್.
ಬೊಂಬಾಯಿಗೆ ಮರೈನ್ ಡ್ರೈವ್ ಹೇಗೋ ಹಾಗೆಯೇ ಶಾರ್ಜಾಕ್ಕೆ ಖಾಲಿದ್ ಲಗೂನ್. ಆಕಾಶದಿಂದ ನೋಡಿದರೆ ಸಮುದ್ರವನ್ನು ಎರೆಡು ಕೊಲ್ಲಿಗಳು ಅಕ್ಕಪಕ್ಕದಲ್ಲಿಯೇ ಭೂಮಿಯೊಳಕ್ಕೆ ಹೋಗಿರುವುದು ಶಾರ್ಜಾದ ತೀರದಲ್ಲಿ ಕಂಡುಬರುತ್ತದೆ. ಒಂದು ವೇಳೆ ಈ ಎರೆಡೂ ಕೊಲ್ಲಿಗಳ ನಡುವೆ ಒಂದು ಕಾಲುವೆ ತೋಡಿ ಸಂಪರ್ಕ ನೀಡಿದರೆ? ಇದನ್ನು ಕಲ್ಪನೆ ಮಾಡಿದವರ ಸಾಕಾರವೇ ಕನಾತ್ ಅಲ್ ಕಸ್ಬಾ.
- ಇರುಳು ಕಂಡ ಬಾವಿಗೆ - ಎರಡನೆಯ ಇನ್ನಿಂಗ್ಸ್ : ಡಿಪಾರ್ಚರ್-
- ಅರ್ಶದ್ ಹುಸೇನ್ ಎಂ. ಹೆಚ್
ಹಿಂದಿನ ಪ್ರಯಾಣದ ಅನುಭವ ಮತ್ತೊಮ್ಮೆ ಆಗದಿರಲಿ ಎಂದು ಹಿಂತಿರುಗುವ ಪ್ರಯಾಣಕ್ಕೆ ಎರೆಡು ದಿನ ಮೊದಲೇ ಫೋನು ಮಾಡಿ ಖಾತರಿ ಪಡಿಸಿಟ್ಟುಕೊಂಡಿದ್ದೆ. ಫೋನು ಸ್ವೀಕರಿಸಿದ ಅಧಿಕಾರಿ ಸಧ್ಯಕ್ಕೆ ಯಾವ ಬದಲಾವಣೆಯೂ ಇಲ್ಲವೆಂದೂ ಒಂದು ವೇಳೆ ಏನಾದರೂ ಇದ್ದಲ್ಲಿ ಕರೆ ಮಾಡಿ ತಿಳಿಸಲಾಗುವುದು ಎಂದೂ ವಿವರಿಸಿದ್ದರು. ಇವರ ಮಾತನ್ನು ನಂಬಿದ ನಾವು ಮತ್ತೊಮ್ಮೆ ಕೋಣರಾದೆವು.
- ಪಾತ್ರ-
- ಪ್ರೇಮಶೇಖರ, ಪಾಂಡಿಚೆರಿ
ಬೀಗ ತೆರೆದು ಬಾಗಿಲು ದೂಡುತ್ತಿದ್ದಂತೇ ನೆಲದ ಮೇಲೆ ಮುಖವಡಿಯಾಗಿ ಬಿದ್ದ ಇನ್ಲ್ಯಾಂಡ್ ಲೆಟರ್ನಲ್ಲಿ ಅಪ್ಪನ ಹೆಸರು ಕಂಡು ಸರಕ್ಕನೆ ಬಾಗಿ ಎತ್ತಿಕೊಂಡು ಹಾಸಿಗೆಯ ಅಂಚಿನಲ್ಲಿ ಕೂತು ಪರಪರ ಬಿಡಿಸಿ ಅಲ್ಲಿದ್ದ ನಾಲ್ಕು ಸಾಲುಗಳನ್ನು ಓದುತ್ತಾ ಹೋದಂತೆ ಗಾಬರಿಗೊಳ್ಳತೊಡಗಿದೆ.
- ಮಹಾಮಾತೆ ಮಂಥರೆ-
- ಸತ್ಯನಾರಾಯಣ. ಬಿ.ಆರ್.
ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್. -ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪. ಸೂರ್ಯೋದಯಕ್ಕೂ ಮೊದಲೆ ಎದ್ದು, ನದಿಯೆಡೆಗೆ ಹೋಗಿ ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನಕ್ಕೆಂದು ನಡುಹೊಳೆಗಿಳಿದ ಭರತ ಯೋಚಿಸಿದ.
- ಇಂತಹದ್ದೂ ಅನುಭವಗಳು-
- ತಳಕು ಶ್ರೀನಿವಾಸ, ಮುಂಬೈ
ಪರಿಚಯವಿಲ್ಲದವರು ಬಹಳ ಸಲುಗೆಯಿಂದ ವರ್ತಿಸಿದರೆ, ಸ್ವಲ್ಪ ಹೆದರಿಕೆ ಆಗುವುದು ಸಹಜ. ಆದರೆ, ನಮ್ಮದಲ್ಲದ ಊರಿನಲ್ಲಿ ನಮ್ಮ ನಾಡು ನುಡಿಯ ಬಲ್ಲವರು, ನಮಗೆ ಸುಲಭದಲ್ಲಿ ಅರ್ಥವಾಗುವಂತೆ ವರ್ತಿಸುವವರು ಎದುರಾದರೆ ಅದೇನೋ ಆಪ್ಯಾಯತನ ತನ್ನ ತಾನಾಗೇ ಮೂಡಿ ಬರುವುದು. ಇದರ ಬಗ್ಗೆ ನನ್ನ ಒಂದೆರಡು ಅನುಭವಗಳನ್ನು ನಿಮ್ಮ ಮುಂದಿಡುತ್ತಿರುವೆ.
- ಓ ಬನ್ನಿ ಬಾಂಧವರೇ...-
- ಗುರು ಬಬ್ಬಿಗದ್ದೆ
ಬನ್ನಿರೆಲ್ಲ ಭಾಂಧವರೆ ಹೊಸ ನಾಡನು ಕಟ್ಟೋಣ
ಜಾತಿ ಮತಗಳ ಮೀರಿದ ಹೊಸ ಜಾಡನು ಹುಡುಕೋಣ



