25
- ಗೋವುಗಳಿಗೆ ಇ-ಬೇಲಿ-
ಗೋವುಗಳಿಗೆ ಇ-ಬೇಲಿ
-ಅರ್ಶದ್ ಹುಸೇನ್ ಎಂ.ಹೆಚ್.
ಬೆಳೆಗಾರರಿಗೆ, ರೈತರಿಗೆ ಬೆಳೆ ಬೆಳೆಯುವುದಕ್ಕಿಂತ ಬೆಳೆದ ಬೆಳೆಯ ರಕ್ಷಣೆಯ ಹೊರೆಯೇ ಹೆಚ್ಚು. ಗದ್ದೆ-ತೋಟಗಳಿಗೆ ಧಾಳಿಯಿಡುವ ಪ್ರಾಣಿಗಳನ್ನು ತಡೆಯಲು ರೈತರು ತೆಗೆದುಕೊಳ್ಳುವ ಕ್ರಮ ಒಂದೆರೆಡಲ್ಲ. ಮುಳ್ಳು ಬೇಲಿ, ತಂತಿ ಬೇಲಿ, ಕಲ್ಲಿನ ಬೇಲಿ, ಪಾಪಾಸುಕಳ್ಳಿಯ ಬೇಲಿ ಇನ್ನೂ ಹತ್ತು-ಹಲವಾರು ತರಹದ ರಕ್ಷಣಾ ಕೋಟೆಗಳನ್ನು ಕಟ್ಟಿದರೂ ಕೆಲವೊಮ್ಮೆ ಜಾನುವಾರುಗಳು ಎಲ್ಲೋ ಒಂದೆಡೆ ನುಸುಳಲು ಮಾರ್ಗ ಹುಡುಕಿ ನುಗ್ಗಿಯೇ ನುಗ್ಗುತ್ತವೆ. ತೋಟಗಳಿಗೆ ಧಾಳಿಯಿಡುವ
ಮಂಗಗಳಿಗಂತೂ ಎಷ್ಟೆತ್ತರ ಬೇಲಿಯಿದ್ದರೂ ನಿರರ್ಥಕ.



