ಸಂಚಿಕೆ ೧೯, ಮಾರ್ಚ್ ೦೭, ೨೦೦೮

ಗಲಭೆ ಸಂತಾನ

ಹೊಡೆ, ಬಡಿ, ಕೊಲ್ಲು - ಇವರ ಕಾಯಕ
ಬೆಂಬಲಿಸಲು ಅಲ್ಲಲ್ಲಿ ರಾಜಕಾರಣಿ ನಾಯಕ
ತಾಯಿಯಂದಿರೇ, ಕೊಡದಿರಿ ಇಂತಹ ಜನನ
ಈ ಸಂತಾನ ಮಾನವ ಕುಲಕ್ಕೆ ಅಪಮಾನ

ಕನ್ನಡದ ಉಳಿವು

ನಮ್ಮ ಭಾಷೆಗೆ ನಮಗಿರಬೇಕು ಅಭಿಮಾನ
ಇಲ್ಲದೆ ಹೋದರೆ ಕನ್ನಡ ಉಳಿಯುವುದು ಅನುಮಾನ
ಉದ್ಧಾರಕ್ಕೆ ಸಾಲದು ಈ ಭಾಷಣ - ಮುಷ್ಕರ
ಮಕ್ಕಳ ನಾಲಗೆಯಲ್ಲಿರಬೇಕು ಶುದ್ಧ ಉಚ್ಚಾರ

ಪತ್ನಿಯ ಬೆಂಬಲ

ಬಡತನದಲ್ಲಿ ಮಗುಚಿಕೊಂಡರೆ ದೋಣಿ
ಆಸರೆಯಾಗಬೇಕು ಕೈ ಹಿಡಿದ ರಾಣಿ
ಅವಳ ಸ್ಫೂರ್ತಿ ಬೆಂಬಲಕ್ಕೆ ಆನೆಯ ಬಲ
ಮತ್ತೆ ಮತ್ತೆ ಸೋತರೂ ಎದ್ದೇಳುವ ಛಲ