ಗಲಭೆ ಸಂತಾನ
ಹೊಡೆ, ಬಡಿ, ಕೊಲ್ಲು - ಇವರ ಕಾಯಕ
ಬೆಂಬಲಿಸಲು ಅಲ್ಲಲ್ಲಿ ರಾಜಕಾರಣಿ ನಾಯಕ
ತಾಯಿಯಂದಿರೇ, ಕೊಡದಿರಿ ಇಂತಹ ಜನನ
ಈ ಸಂತಾನ ಮಾನವ ಕುಲಕ್ಕೆ ಅಪಮಾನ
ಕನ್ನಡದ ಉಳಿವು
ನಮ್ಮ ಭಾಷೆಗೆ ನಮಗಿರಬೇಕು ಅಭಿಮಾನ
ಇಲ್ಲದೆ ಹೋದರೆ ಕನ್ನಡ ಉಳಿಯುವುದು ಅನುಮಾನ
ಉದ್ಧಾರಕ್ಕೆ ಸಾಲದು ಈ ಭಾಷಣ - ಮುಷ್ಕರ
ಮಕ್ಕಳ ನಾಲಗೆಯಲ್ಲಿರಬೇಕು ಶುದ್ಧ ಉಚ್ಚಾರ
ಪತ್ನಿಯ ಬೆಂಬಲ
ಬಡತನದಲ್ಲಿ ಮಗುಚಿಕೊಂಡರೆ ದೋಣಿ
ಆಸರೆಯಾಗಬೇಕು ಕೈ ಹಿಡಿದ ರಾಣಿ
ಅವಳ ಸ್ಫೂರ್ತಿ ಬೆಂಬಲಕ್ಕೆ ಆನೆಯ ಬಲ
ಮತ್ತೆ ಮತ್ತೆ ಸೋತರೂ ಎದ್ದೇಳುವ ಛಲ