ಸಂಚಿಕೆ ೧೭, ಫೆಬ್ರವರಿ ೨೨, ೨೦೦೮

ಅವರವರ ಭಾಗ್ಯ

ಕೆಲವರಿಗೆ ಕಷ್ಟ ಮೂರು ಹೊತ್ತಿನ ಅನ್ನ
ಇನ್ನು ಕೆಲವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ನಮ್ಮ ಜೊತೆಯಲ್ಲಿಯೇ ಇರುವುದಾದರೂ ಇವರು
ಹಣೆಬರಹದಲ್ಲಿ ಪ್ರತ್ಯೇಕ ಮೊಹರು

ಗಲ್ಫಿನ ಪರಿಸ್ಥಿತಿ

ಅಂದು ಸಂಪಾದಿಸಲು ಇರಲಿಲ್ಲ ಅಡ್ಡಿ
ಈಗ ಸಾಲಕ್ಕೆ ಕಟ್ಟಿ ಸಾಕಾಗಿದೆ ಬಡ್ಡಿ
ಬರಬೇಡಿ ಸ್ವಪ್ನಗಳ ಮೂಟೆ ಹೇರಿಕೊಂಡು
ಪ್ಯಾಂಟು ಕಳಚಿ ಉಳಿಯುವುದು ಬರೇ ಮುಂಡು

ಮರೆಯಾದ ಪ್ರೇಯಸಿಗೆ

ಆಗಿ ಹೋದೆ ಇನ್ನೊಬ್ಬರ ತೋಳಬಂಧಿ
ನನ್ನಂನಂತೂ ಜೀವಂತ ಕೊಂದಿ
ಬಾಳಬೇಕು ದುಃಖದಲ್ಲೂ ನಕ್ಕು
ನೆನಪುಗಳೇ ಉಳಿದಿರುವ ಹಕ್ಕು