ಸಂಚಿಕೆ ೪ ನವೆಂಬರ್ ೨೩ ೨೦೦೭

ಮುರಿದ ಮದುವೆ

ಸುಖವಿಲ್ಲವೆಂದು ಜೊತೆಗೆ ಬಾಳಿ

ಯಡ್ಡಿ ಎಸೆದರು ಕೊರಳ ತಾಳಿ

ಇರುವಾಗ ದೇವೆಗೌಡರೆಂಬ ಪುಢಾರಿ

ಇನ್ನು ಬೇಕೇ ಮೈತ್ರಿಯೆಂಬ ಸವಾರಿ?

 

ಅಂಧ ಸಂಸ್ಕಾರ

ಆತ ಸತ್ತ ಮದ್ದಿಗೂ ಇಲ್ಲದೆ ಗತಿ

ಮಕ್ಕಳು ಮಾಡಿದರು ವೈಭವದ ತಿಥಿ

ವ್ಯಯವಾಗುತ್ತಿದ್ದರೆ ಕಾಯಿಲೆಗೆ ಹಣ

ಬಹುಶಃ ಅಪ್ಪ ಆಗುತ್ತಿರಲಿಲ್ಲ ಹೆಣ

 

ಪ್ರೇಮಿಗೆ

ನನ್ನ ಸೋಲು ಬೀಳು ದುಃಖ

ಕಂಡು ನೀನು ಪಡುವುದಾದರೆ ಸುಖ

ಬರಲಿ ನನಗೆ ಇನ್ನಷ್ಟು ಕಷ್ಟ

ಎಲ್ಲವೂ ಸಹಿಸಲು ನನಗಿಷ್ಟ

Syndicate

Syndicate content