ಸಂಚಿಕೆ ೩, ನವೆಂಬರ್ ೧೬ ೨೦೦೭
Submitted by Gopinatha Rao on November 17, 2007 - 12:49am.
ಧನ ಪಿಶಾಚಿಗಳು
ಧನ ಹೊಳೆಯಾಗಿ ಹರಿದರೂ ಅತೃಪ್ತ
ಇನ್ನಷ್ಟು ಕೊಡು ಅನ್ನುತ್ತಾನೆ ಭಕ್ತ
ಪ್ರಾಣ ಪಕ್ಷಿ ಹಾರುವ ವರೆಗೆ
ತುಂಬದು ಬಯಕೆಯೆಂಬ ಚರಿಗೆ
ಹೊಸ ಮುಖ್ಯಮಂತ್ರಿಗಳಿಗೆ
ತಿಳಿದಿತ್ತು ರಾಜಕೀಯ ಅನ್ನುವುದು ಕುಬುದ್ಧಿ
ನೀವು ಮಾಡಿದ್ದೀರಿ ಎಲ್ಲೆಡೆ ಸುದ್ದಿ
ಕೊನೆಗೆ ನನಸಾಯಿತಲ್ಲ ಕನಸು
ಇನ್ನಾದರೂ ಅಭಿವೃದ್ಧಿಗೆ ಕೊಡಿ ಮನಸು
ವ್ಯತ್ಯಾಸ
ಪ್ರೇಮಕ್ಕೆ ಕೂಡಿ ಬಂದರೆ ಯೋಗ
ಕಲ್ಯಾಣ ಮಂಟಪ ಏರುತ್ತಾರೆ ಬೇಗ
ಹಿಡಿದರೆ ಪ್ರೀತಿ ಪ್ರೇಮಕ್ಕೆ ಗ್ರಹಣ
ಜಿಗುಪ್ಸೆಯಲ್ಲಿ ಎದುರಾಗುತ್ತದೆ ಮರಣ








