ಸಂಚಿಕೆ 29 ಮೇ 9 2008
Submitted by Gopinatha Rao on May 16, 2008 - 10:49am.
ಸಂಬಂಧ
ಇದ್ದರೂ ಒಂದೇ ಸೂರಿನ ಕೆಳಗೆ
ಶಾಂತಿ-ನೆಮ್ಮದಿಯಿಲ್ಲ ಮನೆಯೊಳಗೆ
ಒಡಹುಟ್ಟಿದವರೇ ಹಾಕೊಕೊಂಡಾಗ ಗಂಟುಮುಖ
ಎಲ್ಲಿ ಹುಡುಕಿದರೂ ಸಿಗದು ಮನದ ಸುಖ
ಯೋಗ್ಯ ನಾಯಕ
ಸ್ವಾರ್ಥವೇ ಆಗಿರುವಾಗ ಕಾಯಕ
ಯಾರಿದ್ದಾರೆ ಆರಿಸಲು ಯೋಗ್ಯ ನಾಯಕ?
ಕೊನೆಗೆ ದೊರಕಿಸಿಕೊಟ್ಟರೂ ಮಂತ್ರಿಪಟ್ಟ
ತುಂಬಿಕೊಳ್ಳುತ್ತಾರೆ ಬ್ರಷ್ಟಾಚಾರ ಮೂಗಿನ ಮಟ್ಟ
ದಾಂಪತ್ಯ
ಎಷ್ಟೇ ಇರಲಿ ಜಗಳ ಕಿಟಿಪಿಟಿ
ಅಪ್ಪುಗೆಯಲ್ಲಿ ಸಿಕ್ಕರೆ ಇಬ್ಬರ ತುಟಿ
ಮುಗಿಯಿತು ಕೋಪ, ಅರಳಿತು ಒಲವು
ಪ್ರೇಮಕ್ಕೆ ಮೂಡಿತು ಹೊಸ ಗೆಲುವು.








