ಸಂಚಿಕೆ ೨೪, ೧೧ ಎಪ್ರಿಲ್, ೨೦೦೮

 ಊರಿನ ಮಳೆ

ಋತುಮಾನವಿಲ್ಲದೆ ಸುರಿಯಿತು ಮಳೆ
ನಾಶವಾಯಿತು ಭರವಸೆಯಿಟ್ಟ ಬೆಳೆ
ದೇವನಿಗಿಂತ ವಿಜ್ಞಾನವೇ ಆದರೆ ಮೇಲು
ಎದುರಾಗುವುದು ಇಂತಹ ಸವಾಲು

ಮತಭಿಕ್ಷೆಗೆ

ಆದಂತೆ ಚುನಾವಣೆಯ ಘೋಷಣೆ
ಇನ್ನು ಹಳ್ಳಿ ಹಳ್ಳಿಗೆ ಬರುತ್ತಾರೆ ಪ್ರದಕ್ಷಿಣೆ
ಗೆದ್ದಾಗ ತಿರುಗಿನೋಡಲಿಲ್ಲ ಹಿಂದೆ
ಈಗ -'ಕಾಪಾಡು ಓ ನನ್ನ ತಂದೆ'

ಯುದ್ಧ ಮತ್ತು ಕೈದಿ

ಮುಗಿದ ಬಳಿಕ ಯುದ್ಧ
ತಿಳಿಯುವುದು ಯಾರು ಗೆದ್ದ
ಲಗ್ನವೂ ಹೀಗೇ ಒಂದು ರಣರಂಗ-
ಸೋತರೆ ವಾಸಿ ಇವನಿಗಿಂತ ಮಂಗ!

Syndicate

Syndicate content