ಸಂಚಿಕೆ ೨೧, ೧೪ ಮಾರ್ಚ್, ೨೦೦೮

ಗಲ್ಫಿನ ಬ್ರಹ್ಮಚಾರಿ

ಊರಿನ ದುಡಿತಕ್ಕೆ ಬಂತು ಕೊಬ್ಬು
ಇಲ್ಲಿ ಗಾಣಕ್ಕೆ ಸಿಲುಕಿದ ಕಬ್ಬು
ಒಂಟಿ ಬಾಳು,ಜೀವನ ರಸ ಸಪ್ಪೆ
ಖರ್ಚು ಕಳೆದು ಉಳಿಯುವುದು ಬರೇ ಸಿಪ್ಪೆ

ಬಂಡವಾಳಶಾಹಿಗಳು

ಇರುವುದಾದರೆ ತಿಮಿಂಗಿಲಗಳ ಮಧ್ಯೆ
ಮಾಡಬಾರದು ಎಚ್ಚರತಪ್ಪಿ ನಿದ್ದೆ
ನೋಡುವುದಿಲ್ಲ ಇವರು ಪಾಪಪುಣ್ಯದ ಮುಖ
ಹಣದ ಮೇಲೆ ಹಣಮಾಡುವುದೇ ಇವರ ಸುಖ

ಸಲಹೆ

ಸಮಸ್ಯೆಗೆ ಉತ್ತರವಲ್ಲ ಹರಿಯುವ ನೆತ್ತರು
ಹಗೆಯ ಹೃದಯಕ್ಕೆ ಹಚ್ಚಿ ಪ್ರೀತಿಯ ಅತ್ತರು
ಬದಿಗಿಡಿ ಈ ಮಚ್ಚು, ದೊಣ್ಣೆ, ಖಡ್ಗ, ಕತ್ತಿ
ದ್ವೇಷ ಬಿಟ್ಟು ದೇಶ ಕಟ್ಟುವ ಧ್ವನಿ ಎತ್ತಿ

 

Syndicate

Syndicate content