ಸಂಚಿಕೆ ೨೦, ಮಾರ್ಚ್ ೧೪, ೨೦೦೮
Submitted by Gopinatha Rao on March 21, 2008 - 6:02pm.
ಅಪ್ಪ ಮತ್ತು ವರದಕ್ಷಿಣೆ
ವರದಕ್ಷಿಣೆಯ ಜ್ವಾಲೆ ನಾಲ್ಕು ಸುತ್ತಲು
ಹಿಡಿದು ಸಾಕಾಗಿದೆ ಗಂಡುಹೆತ್ತವರ ಕಾಲು
ನೋಡಲಾರೆ ಪ್ರಾಯ ಮೀರುತ್ತಿರುವ ಹರೆಯ
ಇದ್ದರೆ ಹೇಳಿ ಕುಂಟ ಕುರುಡ ಅಥವಾ ಮುದಿಯ
ಮರಾಠಿಗರು - ಬಿಹಾರಿಗಳು
ಎಲ್ಲಿ ಹೋಯಿತು ಶಾಂತಿಯ ತೋಟ
ತಾಳಲಾರದೆ ಓಡಿದರು ಮರಾಠಿಗರ ಕಾಟ
ಕಷ್ಟ ಪಡುವ ಮಂದಿಯ ಬೆನ್ನಿಗೆ ಗುದ್ದು
ಹಣ ಸುರಿಯುವವರಿಗೆ ಬರಸೆಳೆದು ಮುದ್ದು
ಒಲಿಸಿಕೊಳ್ಳಬೇಕಾದರೆ...
ನಿನ್ನಂತೆ ಯಾರೂ ಇಲ್ಲ ಸುರ ಸುಂದರಿ
ಬಿಡು ಕೋಪ ತಂದಿರುವೆ ಚಿಕನ್ ತಂದೂರಿ
ಒಲಿಸಿಕೊಳ್ಳಲು ಬೇಕು ಇಂತಹ ಗಿಮಿಕು
ಇಲ್ಲದಿದ್ದರೆ ತಪ್ಪದು ಮನೆಯಾಕೆಯ ಕಿರಿಕು








