ಸಂಚಿಕೆ ೧೪, ಫೆಬ್ರವರಿ ೦೧, ೨೦೦೮
Submitted by Gopinatha Rao on February 8, 2008 - 5:43pm.
ದುರಾಶೆ
ನಾಯಿಯೂ ತೋರಿಸುತ್ತದೆ ಋಣ
ಮನುಷ್ಯನಿಗೇ ಕಡಿಮೆ ಈ ಗುಣ
ತಾನು ತಿಂದರೂ ಮನೆಯ ಅನ್ನ
ದುರಾಶೆಯಲ್ಲಿ ಅಲ್ಲಿಗೇ ಹಾಕುತ್ತಾನೆ ಕನ್ನ
ಚಿತ್ರಗಳ ಅದೃಷ್ಟ
ಸುರಿದರೆ ಭರ್ಜರಿ 'ಮುಂಗಾರು ಮಳೆ'
ಇವತ್ತಿನಂತೆ ಬರಬೇಕಾಗಿಲ್ಲ ನಾಳೆ
ಇದ್ದರೂ ಕಥೆ ನಟನೆ ನಿರ್ದೇಶನ
'ಗಾಳಿಪಟ' ಆಗಿಹೋಯಿತು ಪತನ
ನಗು
ಪರ್ವಾಗಿಲ್ಲ ನಗುತ್ತ ಇರಿ ಬಿದ್ದು ಬಿದ್ದು
ನಗು ಹಲವು ಕಾಯಿಲೆಗಳಿಗೆ ಮದ್ದು
ಆದರೆ ನೋಡಿ ಕೊಳ್ಳಿ ಸುತ್ತ ಮುತ್ತ
ಅಂದುಕೊಂಡಾರು ಸರಿಯಾಗಿಲ್ಲ ಚಿತ್ತ








