ಸಂಚಿಕೆ ೧೦, ೦೪ ಜನವರಿ ೨೦೦೮
Submitted by Gopinatha Rao on January 11, 2008 - 6:21pm.
ಹೊಸ ವರುಷ
ಸಂತೋಷವೇ ಬರಲಿ ಸಾಲು ಸಾಲು
ಇನ್ನೊಬ್ಬರ ತಂಟೆಗೆ ಬೇಡ ನಮ್ಮ ಕಾಲು
ಬಯಸುವ ಎಲ್ಲರ ಸುಖ ನೆಮ್ಮದಿ
ಸಾಧನೆಯಲ್ಲಿ ತರುವ ದೇಶದ ಅಭಿವೃದ್ಧಿ
ಶವಮಂಚ ಹೇಳಿದ್ದು
ಸಾಮ್ರಾಟ ಗೆಲ್ಲಲು ಹೊರಟಾಗ ಪ್ರಪಂಚ
ಎದುರಾಯಿತು ಸಾಗುತ್ತಿರುವ ಶವಮಂಚ
ಅಣಕಿಸಿ ಹೇಳಿತು - ನಿನ್ನ ಬುದ್ಧಿಗೆ ಗ್ರಹಣ
ಶಾಶ್ವತವಲ್ಲ ಕಿರೀಟ, ಕಾದಿದೆ ನಿನಗೂ ಮರಣ
ದುಬೈಯಲ್ಲಿ...
ದೂರದ ಮಂದಿಗೆ ಇಲ್ಲಿ "ಸ್ವರ್ಗವಾಸ"
ಬಲ್ಲವರಿಗೇ ಗೊತ್ತು ಇದರ ಸಹವಾಸ
ಕಂಡರೆ ಸಾಕು ಏರುತ್ತಿರುವ ಬಾಡಿಗೆ
ಮರಳಿ ಹೋಗುವ ಅನಿಸುತ್ತಿದೆ ನಾಡಿಗೆ








