ಸಂಚಿಕೆ ೧೦, ೦೪ ಜನವರಿ ೨೦೦೮

ಹೊಸ ವರುಷ

ಸಂತೋಷವೇ ಬರಲಿ ಸಾಲು ಸಾಲು
ಇನ್ನೊಬ್ಬರ ತಂಟೆಗೆ ಬೇಡ ನಮ್ಮ ಕಾಲು
ಬಯಸುವ ಎಲ್ಲರ ಸುಖ ನೆಮ್ಮದಿ
ಸಾಧನೆಯಲ್ಲಿ ತರುವ ದೇಶದ ಅಭಿವೃದ್ಧಿ

ಶವಮಂಚ ಹೇಳಿದ್ದು

ಸಾಮ್ರಾಟ ಗೆಲ್ಲಲು ಹೊರಟಾಗ ಪ್ರಪಂಚ
ಎದುರಾಯಿತು ಸಾಗುತ್ತಿರುವ ಶವಮಂಚ
ಅಣಕಿಸಿ ಹೇಳಿತು - ನಿನ್ನ ಬುದ್ಧಿಗೆ ಗ್ರಹಣ
ಶಾಶ್ವತವಲ್ಲ ಕಿರೀಟ, ಕಾದಿದೆ ನಿನಗೂ ಮರಣ

ದುಬೈಯಲ್ಲಿ...

ದೂರದ ಮಂದಿಗೆ ಇಲ್ಲಿ "ಸ್ವರ್ಗವಾಸ"
ಬಲ್ಲವರಿಗೇ ಗೊತ್ತು ಇದರ ಸಹವಾಸ
ಕಂಡರೆ ಸಾಕು ಏರುತ್ತಿರುವ ಬಾಡಿಗೆ
ಮರಳಿ ಹೋಗುವ ಅನಿಸುತ್ತಿದೆ ನಾಡಿಗೆ

Syndicate

Syndicate content