-ಏ.ವಿ.ಪ್ರಸನ್ನ ಗೋಪಾಲ್
ನವ ವರುಷದಲಿ ಹೊಸ ಹರುಷವ ಕಾಣುವ
ಹೊಸ ಹೊಸ ಚಿ೦ತನೆಗಳನು ಮಾಡುವ
ನಮ್ಮಾಸೆ ಆಕಾ೦ಕ್ಷೆಗಳನು ಈಡೇರಿಸಲು ಪ್ರಯತ್ನಿಸುವ
ಎಲ್ಲೆಡೆ ಸ೦ತಸ , ಪ್ರೀತಿ ಪ್ರೇಮಗಳ ಹರಡುವ
- ಪ್ರಶಾಂತ್ ಕುಮಾರ್
ಯಾರೋ ಪ್ರೇಮಿ ಅನ್ನುತ್ತಾರೆ ಇನ್ಯಾರೋ ಹುಚ್ಚ ಅನ್ನುತ್ತಾರೆ
ಆದರೆ ಭೂಮಿಯ ಬಾಯಾರಿಕೆ ಮೋಡಕ್ಕೆ ಗೊತ್ತು
ನಾನು ನಿನ್ನಿಂದ ದೂರವಿಲ್ಲ ನೀನು ನನ್ನಿಂದ ದೂರ ಇಲ್ಲ
ಇದು ನನ್ನ ನಿನ್ನ ಹೃದಯಕ್ಕೇ ಗೊತ್ತು   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ, ರಿಚ್ಮಂಡ್ ವಿ.ಎ.
ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿರುವ ಅವನು ಯಾರು ? ಅವನ ದೇಶ, ಭಾಷೆ, ವೇಷ ಯಾವುದು ಎಂದಿರಾ ? ನೀವೇ ನೋಡಿ... ಇದು ಕೇವಲ ನನ್ನ ಅನಿಸಿಕೆ ಮಾತ್ರ ....
-ಆ.ವೆ೦.ಪ್ರಸನ್ನ ಗೋಪಾಲ್
ಆರ್ಥಿಕ ಡೋಲಾಯಮಾನ
ಕಾಲ ಚಕ್ರದ ಓಟದಲಿ 2008 ರ ಸ೦ವತ್ಸರದ ಹಲವಾರು ಮಾಸಗಳು ಕಳೆದಿತ್ತು
ನೋಡು ನೋಡುತ್ತಿದ್ದ೦ತೆಯೇ ನವವರ್ಷವು ಸ೦ಭ್ರಮದ ಆಗಮನಕ್ಕೆ ಸಿದ್ದವಾಗುತ್ತಿತ್ತು.
ರಾಜಕೀಯ,ಸಾಮಾಜಿಕ,ಕೋಮುವಾರು,ಅತಿಗಾಮಿಗಳ ಸಮಸ್ಯೆಗಳ ನಡುವೆ ಹೆಣೆಗಾಡುತ್ತಿತ್ತು ಜಗತ್ತು
ಆರ್ಥಿಕ ತಜ್ಞರಿಗೆ , ಮೇಧಾವಿಗಳಿಗೆ ಗೋಚರಿಸಲಿಲ್ಲ ಸನಿಹದಲ್ಲಿಯೇ ಸುಳಿದಾಡುತ್ತಿದ್ದ ಆರ್ಥಿಕ ವಿಪತ್ತು
-ಪ್ರಶಾಂತ್ ಕುಮಾರ್
ಅವಳ ಚಿತ್ರ ಬರೆಯ ಹೋದೆ
ಕಲ್ಪನೆಯಲ್ಲಿ ಅವಳನ್ನು ಬಂಧಿಸಲಾಗದೆ ಸೋತೆ !!   ಪೂರ್ತಿ ಓದಿ... »




