-ಅರ್ಶದ್ ಹುಸೇನ್ ಎಂ. ಹೆಚ್.
(ಈ ಲೇಖನದ ಸಾರಾಂಶ ಕನ್ನಡ ವಾರಪತ್ರಿಕೆ-'ತರಂಗ'ದ ೨೪ನೇ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕೈಗಡಿಯಾರ ನಮ್ಮೆಲ್ಲರ ಬಳಿ ಇದೆ. ಹಿಂದಿನವರಿಗೆ ಹೋಲಿಸಿದರೆ ನಮ್ಮ ಬಳಿ ಇರುವ ಕೈಗಡಿಯಾರಗಳು ಹೆಚ್ಚು ಕರಾರುವಾಕ್ಕಾಗಿಯೂ ಸುಂದರವಾಗಿಯೂ ಇದೆ. ಕೈಗಡಿಯಾರದ ವಿನ್ಯಾಸ, ಬಿಡಿಭಾಗ, ವೈಶಿಷ್ಟ್ಯತೆ, ತಯಾರಿಸುವ ಸಂಸ್ಥೆ ಇತ್ಯಾದಿಗಳನ್ನವಲಂಬಿಸಿ ನೂರು ರೂಪಾಯಿಯಿಂದ ಲಕ್ಷ ರೂಪಾಯಿ ಬೆಲೆಬಾಳುವ ಕೈಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಯಾವುವೂ ಇಂದು ಲಭ್ಯವಿರುವ ಅತ್ಯಂತ ದುಬಾರಿ ಕೈಗಡಿಯಾರದ ಒಂದು ಭಾಗಕ್ಕೂ ಸಮನಾಗುವುದಿಲ್ಲವೆಂದರೆ ನಂಬುತ್ತೀರಾ?   ಪೂರ್ತಿ ಓದಿ... »
-ಇರ್ಶಾದ್ ಮೂಡಬಿದ್ರಿ, ದುಬೈ
ನಾನು ಮೂಡಬಿದ್ರಿಯ ಡಿ.ಜೆ (ದಿಗಂಬರ ಜೈನ್) ಒಂದು ವರುಷ ಮಾತ್ರ ಕಲಿತರೂ ಅಲ್ಲಿಯ ನೆನಪುಗಳು ಸದಾ ಹಸಿರು. ಆ ಶಾಲೆಗೆ ಇದೀಗ (೨೦೦೮) ನೂರು ವರ್ಷಗಳ ಸಂಭ್ರಮ. ಇವತ್ತು ಈ ಶಾಲೆ ತೊರೆದು ಇಪ್ಪತ್ತೈದು ವರ್ಷಗಳು ಕಳೆದರೂ ಆ ಬಾಲ್ಯ, ಆ ದಿನಗಳು ನೆನಪಾಗಿ ಕಾಡುತ್ತವೆ.   ಪೂರ್ತಿ ಓದಿ... »
ಇಂದು ಸಂಜೆ ಐದರಿಂದ ಎಂಟು ಘಂಟೆಯವರೆಗೆ ಕನ್ನಡ ಕೂಟ ಯು.ಎ.ಇ. ಹಾಸ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.   ಪೂರ್ತಿ ಓದಿ... »
-ಜಯರಾಮ ಸೋಮಯಾಜಿ
ಪರದೇಶಗಳಿಗೆ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ಬಂದಿರುವವರ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆ ಹೇಗೆ ಎಂಬುದು ಅವರವರ ಮಕ್ಕಳು ಇಲ್ಲಿನ ಶಾಲಾಭ್ಯಾಸ ಮುಗಿಯುವ ವೇಳೆಗೆ ಹೆತ್ತವರಿಗೆ ಬಿಸಿ ತಟ್ಟುತ್ತದೆ. ಮುಂದೇನು? ಎಲ್ಲಿಗೆ ಕಳುಹಿಸುವುದು?   ಪೂರ್ತಿ ಓದಿ... »
- ಇರ್ಶಾದ್ ಮೂಡಬಿದ್ರಿ
ಇದೇ ಬರುವ ಎಪ್ರಿಲ್ ಹನ್ನೊಂದರಂದು ದುಬೈಯ ಅಲ್ ನಾಸರ್ ಲೀಶರ್ ಲ್ಯಾಂಡ್ ಐಸ್ ರಿಂಗ್ ನಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಇಲ್ಲಿ ತೂಗುದೀಪ ಶ್ರೀನಿವಾಸರ ಪುತ್ರ ನಟ ದರ್ಶನ್ ಅವರು ತನ್ನ ಜೊತೆಗೆ ಐವತ್ತಕ್ಕೂ ಹೆಚ್ಚಿನ ತಾರಾಬಳಗ ಹಾಗೂ ನೃತ್ಯ ತಂಡವನ್ನು ವೇದಿಕೆಗೆ ಕರೆ ತರಲಿದ್ದಾರೆ.   ಪೂರ್ತಿ ಓದಿ... »
-ಇರ್ಶಾದ್ ಮೂಡಬಿದ್ರಿ
ಮುಹಮ್ಮದ್ ಕುಳಾಯಿ ನನ್ನ ಕಾಲೇಜು ದಿನಗಳ ಮೆಚ್ಚಿನ ಕಥೆಗಾರ. ನಾನು ಹೆಚ್ಚಾಗಿ ಅವರ ಕಥೆಗಳನ್ನು ಉದಯವಾಣಿ ಸಾಪ್ತಾಹಿಕ ಹಾಗೂ ಸನ್ಮಾರ್ಗದಲ್ಲಿ ಓದುತ್ತಿದ್ದೆ. ಅದಕ್ಕೀಗ ಪ್ರತಿಕ್ರಿಯೆಗಳನ್ನು ಬರೆಯುತ್ತಿದ್ದೇನೆ.   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ.ಹೆಚ್.
(ನಿಕಟಪೂರ್ವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- ಕೃತಿಯಿಂದ ಆಯ್ದ ಭಾಗದ ಕನ್ನಡ ಅನುವಾದ)
ಸುಭದ್ರ ಭಾರತಕ್ಕೆ ಮೂರು ಸೂತ್ರಗಳು
ಸೂತ್ರ ೧: ಸುಮಾರು ಮೂರು ಸಾವಿರ ವರ್ಷಗಳಿಂದ ವಿಶ್ವದ ಎಲ್ಲೆಡೆಗಳಿಂದ ಅತಿಕ್ರಮಣಕಾರರು ಭಾರತಕ್ಕೆ ಧಾಳಿಯಿಟ್ಟು ನಮ್ಮ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ ಹೆಚ್.
ಶೀರ್ಷಿಕೆ ನೋಡಿ ಕನ್ನಡ ನಟ ಉಪೇಂದ್ರ ಮಹಾತ್ಮೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ವಿಷಯ ನಮ್ಮ ಸಂಬಳದ್ದು. ಸಂಬಳ ಅಂದರೆ ಸ್ಯಾಲೇರಿಯಮ್ - ಅಂದರೆ ಅದೇ ವೇತನವೆಂದು ಮುಂಚೆ ಕೊಡುತ್ತಿದ್ದರಲ್ಲಾ, ಸಾಮಾನ್ಯ ಉಪ್ಪು.   ಪೂರ್ತಿ ಓದಿ... »
(ಕನ್ನಡ ಸಾಹಿತ್ಯಕ ತ್ರೈಮಾಸಿಕ)
ಸಾಹಿತಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೊಸ ಪ್ರಯೋಗ ಇದು. ಕನ್ನಡ ಓದುಗರಿಗೆ ಉತ್ತಮ ಕಥೆಗಳನ್ನು ಓದಲು ಒದಗಿಸಬೇಕೆಂಬ ಅವರ ಆಶಯ ಹಾಗೂ ಪ್ರಯತ್ನಗಳು ಮೇಳೈಸಿ ಈ ಪತ್ರಿಕೆ ಜನ್ಮ ತಾಳಿದೆ.   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ.ಹೆಚ್.
ಭಾರತದಲ್ಲಿದ್ದಾಗ ನಾವು ಹೆಚ್ಚಾಗೆ ಸಿನೇಮಾ ಮಂದಿರದಲ್ಲಿ ಅಥವಾ ಸಾರ್ವಜನಿಕ ಮೂತ್ರಿಗಳಿಗೆ ಹೋಗುತ್ತಿದ್ದುದೇ ಕಡಿಮೆ. ಸ್ವಚ್ಛತೆಯೇ ಇದಕ್ಕೆ ಮುಖ್ಯ ಕಾರಣ. ಬಳಿಕ ಸುಲಭ್ ಶೌಚಾಲಯ ತಕ್ಕ ಮಟ್ಟಿಗೆ ಸ್ವಚ್ಛ ಹಾಗೂ ಉತ್ತಮ ಸೇವೆ ಒದಗಿಸುತ್ತಿದೆ.   ಪೂರ್ತಿ ಓದಿ... »



