-ಸುನಿಲ್ ಮಲ್ಲೇನಹಳ್ಳಿ
ಸ್ನೇಹಿತರೇ, ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ.   ಪೂರ್ತಿ ಓದಿ... »
ಮಣಿಪಾಲದ ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಶ್ರಯದಲ್ಲಿ ಕಳೆದ ಸುಮಾರು 25 ವರುಷಗಳಿ೦ದ ಮುದ್ರಣಗೊ೦ಡು ಕರಾವಳಿಯಲ್ಲಿ ಮನೆ ಮಹಿಳೆಯರ ಪ್ರೀತಿಯ ಹಾಗೂ ಎಲ್ಲರ ಮನೆ ಮಾತಾಗಿರುವ ಪ್ರಸಿದ್ದ ‘ತರ೦ಗ’ವಾರ ಪತ್ರಿಕೆಗೆ ಎಪ್ರಿಲ್ 26ರ೦ದು 25 ವಸ೦ತಗಳನ್ನು ಪೂರೈಸಿದ ‘ರಜತ ಸ೦ಭ್ರಮ’.   ಪೂರ್ತಿ ಓದಿ... »
ಗೋವುಗಳಿಗೆ ಇ-ಬೇಲಿ
-ಅರ್ಶದ್ ಹುಸೇನ್ ಎಂ.ಹೆಚ್.
ಬೆಳೆಗಾರರಿಗೆ, ರೈತರಿಗೆ ಬೆಳೆ ಬೆಳೆಯುವುದಕ್ಕಿಂತ ಬೆಳೆದ ಬೆಳೆಯ ರಕ್ಷಣೆಯ ಹೊರೆಯೇ ಹೆಚ್ಚು. ಗದ್ದೆ-ತೋಟಗಳಿಗೆ ಧಾಳಿಯಿಡುವ ಪ್ರಾಣಿಗಳನ್ನು ತಡೆಯಲು ರೈತರು ತೆಗೆದುಕೊಳ್ಳುವ ಕ್ರಮ ಒಂದೆರೆಡಲ್ಲ. ಮುಳ್ಳು ಬೇಲಿ, ತಂತಿ ಬೇಲಿ, ಕಲ್ಲಿನ ಬೇಲಿ, ಪಾಪಾಸುಕಳ್ಳಿಯ ಬೇಲಿ ಇನ್ನೂ ಹತ್ತು-ಹಲವಾರು ತರಹದ ರಕ್ಷಣಾ ಕೋಟೆಗಳನ್ನು ಕಟ್ಟಿದರೂ ಕೆಲವೊಮ್ಮೆ ಜಾನುವಾರುಗಳು ಎಲ್ಲೋ ಒಂದೆಡೆ ನುಸುಳಲು ಮಾರ್ಗ ಹುಡುಕಿ ನುಗ್ಗಿಯೇ ನುಗ್ಗುತ್ತವೆ. ತೋಟಗಳಿಗೆ ಧಾಳಿಯಿಡುವ
ಮಂಗಗಳಿಗಂತೂ ಎಷ್ಟೆತ್ತರ ಬೇಲಿಯಿದ್ದರೂ ನಿರರ್ಥಕ.   ಪೂರ್ತಿ ಓದಿ... »
- ಬಿ ಆರ್ ಸತ್ಯನಾರಾಯಣ
ತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:
ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ.   ಪೂರ್ತಿ ಓದಿ... »
ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.   ಪೂರ್ತಿ ಓದಿ... »
- ಬಿ ಆರ್ ಸತ್ಯನಾರಾಯಣ
ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ
ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ.
-ನಳಿನಿ ಸೋಮಯಾಜಿ
ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ......   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ. ಹೆಚ್.
ಮೇಲಿನ ಚಿತ್ರ ಇತ್ತೀಚೆಗೆ ತೆಗೆದದ್ದು. ನೋಡಲು ಅತ್ಯಂತ ಸುಂದರವಾಗಿ ಕಂಡಿತಲ್ಲಾ. ನಮಗೂ ಹೀಗೇ ಕಂಡಿತ್ತು. ತೀರ್ಥಹಳ್ಳಿ - ಕೊಪ್ಪ ರಸ್ತೆಯ ನಡುವೆ ಕಂಡುಬಂದ ಒಂದು ದೃಶ್ಯವಿದು. ಇಡಿಯ ಮಲೆನಾಡಿನಲ್ಲೇ ಕಂಡುಬರುವ ಯಾವುದೇ ಗದ್ದೆಯ ಸಾಮಾನ್ಯ ನೋಟವಿದು. ಅರೆ, ಸುಂದರವಾಗಿಯೇ ಇದೆಯಲ್ಲಾ, ಮಲೆನಾಡಿಗೇನಾಗುತ್ತಿದೆ?   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞಾಪಿಸುತ್ತಾನೆ. ಆದರೆ ಒಬ್ಬ ಸೈನಿಕನೂ ನಿಂತಲ್ಲಿಂದ ಕದಲುವುದಿಲ್ಲ. ಕಂಸನು ತನ್ನ ಪರಾಕ್ರಮದಿಂದ ಎಲ್ಲರನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದನೆಂದು ಅಗ ಮಹಾರಾಜನಿಗೆ ಅರಿವಾಗುತ್ತದೆ.   ಪೂರ್ತಿ ಓದಿ... »
- ಬಿ ಆರ್ ಸತ್ಯನಾರಾಯಣ
ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು
ಚಿದಂಬರ ರಹಸ್ಯ ಕಾದಂಬರಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಸನ್ನಿವೇಶದ ಚಿತ್ರಣ ಬರುತ್ತದೆ. ನರಿ ಹೊಡೆಯಲು ಇಟ್ಟಿದ್ದ ಪಟಾಸು ಬಾಂಬು ಸಿಡಿದು ಪಾಟೀಲರು ಗಾಯಗೊಂಡ ಸಂದರ್ಭದಲ್ಲಿ ಜನ ಮಾತನಾಡುತ್ತಾರೆ. ಒಬ್ಬ ‘ಮಸೀದಿಗೆ ಹಿಂದೂಗಳು ನುಗ್ಗಬಹುದು ಅಂತ ಸಾಬರೇ ಬಾಂಬು ಇಟ್ಟಿದ್ದಾರೆ’ ಅನ್ನುತ್ತಾನೆ.   ಪೂರ್ತಿ ಓದಿ... »



