-ಅರ್ಶದ್ ಹುಸೇನ್ ಎಂ.ಹೆಚ್
ನಮ್ಮ ಊರುಗಳಲ್ಲಿ ಪವರ್ ಕಟ್ ಎಂದು ನಾವು ಗೊಣಗಾಡುತ್ತಿರುತ್ತೇವೆ. ನಮಗೆ ಪವರ್ ಕಟ್ ಇದ್ದರೂ ದಿನದ ಕೆಲವಾರು ಘಂಟೆಗಳಾದರೂ ವಿದ್ಯುತ್ ಸಿಗುತ್ತದೆ. ಅದೇ ಆಫ್ರಿಕಾದ ಇನ್ನೂರೈವತ್ತು ಮಿಲಿಯನ್ ಜನರಿಗೆ ವಿದ್ಯುತ್ ಭಾಗ್ಯವೇ ಇಲ್ಲ. ಇಂದಿಗೂ ಅವರು ಕತ್ತಲೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ.   ಪೂರ್ತಿ ಓದಿ... »
-ಎಮ್.ಎಸ್.ರಾಮಚಂದ್ರ,
ಅಂದು ಅಯೋದ್ಯೆಯಲ್ಲಿ ರಾಮನು ಯುವರಾಜನಾಗಿ ಪಟ್ಟಾಬಿಷಿಕ್ತನಾಗಬೇಕಿದ್ದ ದಿನದ ಹಿಂದಿನ ಸಾಯಂಕಾಲ. ನಗರದಲ್ಲಿ ಸಂಭ್ರಮವೋ ಸಂಭ್ರಮ. ನಗರವೆಲ್ಲಾ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ಜನರ ಸಡಗರವಂತೂ ಹೇಳತೀರದು. ಆದರೆ ರಾಣಿ ಕೈಕೇಯಿಯ ಮುದಿ ದಾಸಿಯಾದ ಮಂದರೆಯ ಮನಸ್ಸಿನಲ್ಲಿ ಅದೇನೋ ಅಸೂಯೆ, ಅತೃಪ್ತಿ. ಅವಳಿಗೆ ರಾಮನು ಯುವರಾಜನಾಗುವುದು ಬೇಕಿಲ್ಲ. ಅದನ್ನು ಸಾದಿಸಲು ಮನಸ್ಸಿನಲ್ಲೇ ಒಂದು ಪಥಕವನ್ನು ತಯಾರಿಸಿಕೊಂಡು ರಾಣಿ ಕೈಕೇಯಿಯ ಅಂತಃಪುರದ ಕಡೆಗೆ ಸಾಗುತ್ತಾಳೆ.
ಇದು ನಮಗೆಲ್ಲಾ ತಿಳಿದಿರುವ ರಾಮಾಯಣ.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ, ಮುಂಬೈ
ಶಿವ ಪುರಾಣ, ವಿಷ್ಣು ಪುರಾಣ , ಗರುಡ ಪುರಾಣವನ್ನು ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೀರ. ಆದರೆ ಇದೇನಿದು Wii ಪುರಾಣ ಎಂದುಕೊಳುತ್ತಿರಬಹುದು....
ಇಲ್ಲಿ ನಾನು ಹೇಳಹೊರಟಿರುವುದು Nintendo - Wii ಸ್ವರ್ಗಾರೋಹಣ ಮಾಡಿದ ವಿಷಯದ ಬಗ್ಗೆ.   ಪೂರ್ತಿ ಓದಿ... »
ಕಾಯುತಿರುವೆ ಗೆಳತಿ,
ಕಾಯಿಸದಿರು ಎನ್ನ
ಕಾರಿರುಳು ಆಗಸವ,
ಮುಟ್ಟುವ ಮುನ್ನ ೧
ಕಾಣದಂತೆ ಮಾಯವಾದೆ,
ಕಣ್ಣಿನಂಚಿನಿಂದ ಸರಿದೆ
- ಗೋಪೀನಾಥ ರಾವ್
ಕಳೆದ ವಾರ ನಾನು ಬೆಂಗಳೂರಲ್ಲಿದ್ದೆ. ಗಣೇಶನ ಹಬ್ಬ ಕಳೆದು ದುಬೈಗೆ ವಾಪಸ್ ಬರಬೇಕೆಂಬ ಅಪೇಕ್ಷೆಯಿದ್ದರೂ ಹಾಗಾಗುವುದು ಸಾಧ್ಯವಿರಲಿಲ್ಲ. ಗಣೇಶನ ಹಬ್ಬಕ್ಕೆ ಎರಡು ದಿನ ಮೊದಲೇ ಹಿಂತಿರುಗಬೇಕಾಯಿತು.   ಪೂರ್ತಿ ಓದಿ... »



