-ವರದಿ: ಅರ್ಶದ್ ಹುಸೇನ್ ಎಂ.ಹೆಚ್.
ಅತಿ ಕುತೂಹಲ ಕೆರಳಿಸಿದ್ದ ಗಿರೀಶ್ ಕಾರ್ನಾಡರ ಕನ್ನಡ ನಾಟಕ ಕಳೆದ ಶುಕ್ರವಾರ ದುಬೈ ಇಂಡಿಯನ್ ಕಾನ್ಸುಲೇಟ್ ಹಾಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾರಸಿಕರ ಮನತಣಿಸಿತು. ಸುಮಾರು ಎರೆಡು ತಿಂಗಳುಗಳಿಂದ ಸ್ಥಳೀಯ ಕಲಾವಿದರಿಂದ ಹಯವದನ ನಾಟಕ ಅಭ್ಯಾಸ ನಡೆಸಿ ಉತ್ತಮ ನಾಟಕದ ಪ್ರದರ್ಶನದ ಸಾಧನೆಯ ಹಿಂದಿನ ಶಕ್ತಿ ಮತ್ತು ಪ್ರೇರಣೆ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಪ್ರಯ್ಯಾರ್ ಅವರದ್ದು.   ಪೂರ್ತಿ ಓದಿ... »
-ಪ್ರೇಮಶೇಖರ
ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿದೆ. ಮೊನ್ನೆಯಷ್ಟೇ ಟ್ರ್ಯಾನ್ಸ್ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು ಗಂಡುಮಕ್ಕಳಿರುವ ಸಂಸಾರ ಮೈಸೂರಿನಲ್ಲೇ ಇದೆ.
--ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ಹಯವದನ ನಾಟಕ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಚಂದ್ರಶೇಖರ ಕಂಬಾರರೊಂದಿಗೆ ನಡೆಸಿದ ಸಂವಾದದ ಕೆಲವು ತುಣುಕುಗಳು :
ತುಂಬಿದ ಕೊಡ ತುಳುಕುವುದಿಲ್ಲವಂತೆ. ಚಿಕ್ಕಪುಟ್ಟ ಸಾಧನೆ ಮಾಡಿದವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದ್ದವರು ಕಂಬಾರರೊಂದಿಗೆ ಕೊಂಚಕಾಲ ಕಳೆದಾಕ್ಷಣ ಈ ಗಾದೆ ವೇದ್ಯವಾಗುವುದು ಖಚಿತ.   ಪೂರ್ತಿ ಓದಿ... »
- ಸಂಗ್ರಹ : ಎಮ್.ಎಸ್.ರಾಮಚಂದ್ರ
ಕರ್ನಾಟಕದ ರಾಜದಾನಿಯಾದ ಬೆಂಗಳೂರು ,ಸುಮಾರು ೭೪೦ ಚದರ ಕಿಲೋಮೀಟರ್ ವಿಸ್ತಾರವಾಗಿ ,ಸುಮಾರು ೬೫ ಲಕ್ಷ ಜನಸಂಖ್ಯೆಯಿಂದ ಕೂಡಿ. ಭಾರತದ ಬೃಹತ್ ಪಟ್ಟಣಗಳಲ್ಲಿ ಒಂದಾಗಿ, ವಾಣಿಜ್ಯ, ಕೈಗಾರಿಕೆ ಮತ್ತು ಕಂಪ್ಯೂಟರ್ ಸಾಫ಼್ಟ್ ವೇರ್ ಕಂಪನಿಗಳ ಕೇಂದ್ರವಾಗಿ ಬೆಳೆದು ನಿಂತಿದೆ. ಈ ನಗರದ ಅಸ್ತಿತ್ವ , ದೊರೆತ ಪುರಾವೆಗಳಿಗೆ ಅನುಸಾರವಾಗಿ , ಸಾವಿರ ವರುಷಕ್ಕೂ ಹಿಂದಿನದೆಂದು ತಿಳಿದು ಬರುತ್ತದೆ.   ಪೂರ್ತಿ ಓದಿ... »



